Sunday, September 23, 2012

ಜನುಮ ಜನುಮದ ಅನುಬಂಧ


ಈ ಹಾದಿಯಲ್ಲಿ ನಾನು ಓಡಿ ಬಂದೆ,
ನಿನ್ನಲ್ಲಿ ಅನ್ನವನ್ನು ಬೇಡಲೆಂದೇ .. ಓ ಗಣಪಾ...
ಓ ಗಣಪಾ... ತುತ್ತನು ನೀಡಲು ಬಾ.. ಬಾ.. 

ಸುಖದ ಕನಸು ಮರೆತೇ ಹೋಗಿ,
ನನ್ನಾ ಜೀವ ಸೊರಗಿ.. ಸೊರಗಿ.. 
ಈ ಜೀವನದಲ್ಲಿ ನಾನು ಬೆಂದು ಹೋದೆ. 
ನಾನ್ಯಾವ ಪಾಪ ಮಾಡಿದೆ. 
ಓ ಗಣಪಾ.. ಹಸಿವ ನೀಗಿಸು ಬಾ .. ಬಾ.. 
ಹಸಿವ ನೀಗಿಸು.. 

ನನ್ನನು ನೋಡಿ ನೀ ನಗುತಿರುವೆ, 
ನಿಜಕೂ ನಾನು ಬಲು ಹಸಿದಿರುವೆ,
ನನ್ನಲಿ ನಿನಗೆ ಕರುಣೆ ಇಲ್ಲವೇನು.. 
ನಾ ಬದುಕೋ ಆಸೆ ನನಗಿನ್ನು..
ಓ ಗಣಪಾ.. ಹಸಿವ ನೀಗಿಸು ಬಾ.. ಬಾ...
ಹಸಿವ ನೀಗಿಸು.. 

ಈ ಹಾದಿಯಲ್ಲಿ ನಾನು ಓಡಿ ಬಂದೆ,
ನಿನ್ನಲ್ಲಿ ಅನ್ನವನ್ನು ಬೇಡಲೆಂದೇ .. ಓ ಗಣಪಾ...
ಓ ಗಣಪಾ... ತುತ್ತನು ನೀಡಲು ಬಾ.. ಬಾ.. 

[ " ಜನುಮ ಜನುಮದ ಅನುಬಂಧ " ಚಿತ್ರದ " ತಂಗಾಳಿಯಲಿ ನಾನು ತೇಲಿ ಬಂದೆ " ಎಂಬ ಹಾಡಿಗೆ 
ಕಸ್ತೂರಿ ವಾಹಿನಿಯ "ಹೃದಯ ಗೀತೆ ಬರೆದೆ ನೀನು" ಎಂಬ ಕಾರ್ಯಕ್ರಮದಲ್ಲಿ 
ನಾನು ಬರೆದ ಹೊಸ ಸಾಹಿತ್ಯ..]

No comments:

Post a Comment